ಲೇಖಕರು: ಅನುಷ್ ಎ ಶೆಟ್ಟಿ
ಪ್ರಕಾಶಕರು: ಅನುಗ್ರಹ ಪ್ರಕಾಶನ
"ನಾನೊಬ್ಬ ಪುಸ್ತಕ ಪ್ರೇಮಿ" ಎಂಬ ಫೇಸ್ಬುಕ್ ಗುಂಪಿನ ವಿಮರ್ಶೆಗಳನ್ನು ನೋಡಿ ಕೈಗೆತ್ತಿಕೊಂಡ ಈ ಪುಸ್ತಕ ನನ್ನ ನಿರೀಕ್ಷೆಗೂ ಮೀರಿ ಇಷ್ಟವಾಯಿತು. ಗಿಲ್ಬರ್ಟ್ ಎಂಬ ಖೈದಿಯೊಬ್ಬ ಕಾಲಾಘಾಟಿ ಜೈಲಿನಿಂದ ಮಾಯವಾದಾಗ ಇಡೀ ಪೋಲಿಸ್ ಪಂಗಡಕ್ಕೆ ಅಚ್ಚರಿಯಾಗಿ, ಖೈದಿ ಹೇಗೆ ಪರಾರಿಯಾದ ಎಂಬುದು ಕಬ್ಬಿಣದ ಕಡಲೆಯಾಗಿ ಉಳಿಯುತ್ತದೆ. ತಮ್ಮಿಂದ ಈ ಕೇಸ್ ಬಗೆಹರಿಸಲು ಅಸಾಧ್ಯವಾದಾಗ, ಚೈತನ್ಯ ಮತ್ತು ಮಾಧವ್ ಎಂಬ ಡಿಟೆಕ್ಟಿವ್ ಇಬ್ಬರನ್ನು ಕರೆಸುತ್ತಾರೆ. ಗಿಲ್ಬರ್ಟ್ ನ ಡೈರಿ ಕೈಗೆ ಸಿಕ್ಕ ಅವರು, ಅದನ್ನು ಓದುತ್ತಾ ಈ ಕೇಸ್ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಡೈರಿಯಲ್ಲಿ ಬರೆದದ್ದು ಏನು? ಗಿಲ್ಬರ್ಟ್ ಯಾರು? ಅವನು ಮಾಡಿದ ಅಪರಾಧವಾದರೂ ಏನು? ಅವನು ಜೈಲಿನಿಂದ ಏನೂ ಸುಳಿವು ಬಿಡದೆ ಹೇಗೆ ತಪ್ಪಿಸಿ ಹೋದನು? ಇವೆಲ್ಲವನ್ನೂ ತಿಳಿಯಲು ಪುಸ್ತಕ ಓದಬೇಕು.
ಒಬ್ಬ ಹವ್ಯಾಸಿ ಲೇಖಕನಾಗಿ ನನಗೆ ಈ ಪುಸ್ತಕದಲ್ಲಿ ಖುಷಿ ಕೊಟ್ಟ ಅಂಶಗಳು ಈ ರೀತಿ ಇವೆ.
ಬಿಡುವುಲ್ಲದಿದ್ದರೂ, ಕತೆಯ ಸೆಳೆತದಿಂದ ಬಿಡುವು ಮಾಡಿಕೊಂಡು ನನಗೆ ಎರಡೇ ಗುಕ್ಕಲ್ಲಿ ಓದಿಸಿಕೊಂಡು ಹೋಯಿತು. ಕನ್ನಡದ ಒಂದು ಪ್ರಮುಖ ಚಲನಚಿತ್ರ ಮತ್ತು ಹಾಲಿವುಡ್ ಚಲನಚಿತ್ರದ ನೆನಪು ಕೂಡಾ ಬಂತು. (ಹೆಸರು ಹೇಳಿದರೆ ಇನ್ನೂ ಓದಿರದವರಿಗೆ spoiler / ಓದು ಕೆಡಿಸಿದಂತಾಗುತ್ತದೆ.)
ಇಂತಹ ಕೃತಿ ನಮಗೆ ಕೊಟ್ಟ ಅನುಷ್ ಶೆಟ್ಟಿಯವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು.